ಕರ್ನಾಟಕ ರತ್ನ

Karnataka Ratna

'ಕರ್ನಾಟಕ ರತ್ನ' ಕರ್ನಾಟಕ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.

ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.

ಇದುವರೆವಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.

ಕ್ರಮ ಸಂಖ್ಯೆ ಹೆಸರು ಜನನ / ಮರಣ ಪ್ರಶಸ್ತಿ ಪ್ರಧಾನ ವರ್ಷ ಕಾರ್ಯಕ್ಷೇತ್ರ
1. ಕುವೆಂಪು (ಕೆ. ವಿ. ಪುಟ್ಟಪ್ಪ) 1904 – 1994 1992 ಸಾಹಿತ್ಯ
2. ಡಾ|| ರಾಜ್ ಕುಮಾರ್ 1929 – 2006 1992 ಚಲನಚಿತ್ರ ರಂಗ, ಸಂಗೀತ
3 ಎಸ್. ನಿಜಲಿಂಗಪ್ಪ 1902 – 2000 1999 ರಾಜಕೀಯ
4 ಸಿ. ಎನ್. ಆರ್. ರಾವ್ 1934 2000 ವಿಜ್ಞಾನ
5 ದೇವಿ ಪ್ರಸಾದ್ ಶೆಟ್ಟಿ 1953 2001 ವೈದ್ಯಕೀಯ
6. ಭೀಮಸೇನ ಜೋಷಿ 1922 – 2011 2005 ಸಂಗೀತ
7. ಶ್ರೀ ಶಿವಕುಮಾರ ಸ್ವಾಮಿಗಳು 1907 - 2019 2007 ಸಾಮಾಜಿಕ ಸೇವೆ
8. ದೇ. ಜವರೇಗೌಡ 1915 – 2016 2008 ಶಿಕ್ಷಣ, ಸಾಹಿತ್ಯ
9 ಡಿ. ವೀರೇಂದ್ರ ಹೆಗ್ಗಡೆ 1948 2009 ಸಾಮಾಜಿಕ ಸೇವೆ