ಕರ್ನಾಟಕ ರತ್ನ
'ಕರ್ನಾಟಕ ರತ್ನ' ಕರ್ನಾಟಕ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.
ಇದುವರೆವಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.
ಕ್ರಮ ಸಂಖ್ಯೆ | ಹೆಸರು | ಜನನ / ಮರಣ | ಪ್ರಶಸ್ತಿ ಪ್ರಧಾನ ವರ್ಷ | ಕಾರ್ಯಕ್ಷೇತ್ರ |
---|---|---|---|---|
1. | ಕುವೆಂಪು (ಕೆ. ವಿ. ಪುಟ್ಟಪ್ಪ) | 1904 – 1994 | 1992 | ಸಾಹಿತ್ಯ |
2. | ಡಾ|| ರಾಜ್ ಕುಮಾರ್ | 1929 – 2006 | 1992 | ಚಲನಚಿತ್ರ ರಂಗ, ಸಂಗೀತ |
3 | ಎಸ್. ನಿಜಲಿಂಗಪ್ಪ | 1902 – 2000 | 1999 | ರಾಜಕೀಯ |
4 | ಸಿ. ಎನ್. ಆರ್. ರಾವ್ | 1934 | 2000 | ವಿಜ್ಞಾನ |
5 | ದೇವಿ ಪ್ರಸಾದ್ ಶೆಟ್ಟಿ | 1953 | 2001 | ವೈದ್ಯಕೀಯ |
6. | ಭೀಮಸೇನ ಜೋಷಿ | 1922 – 2011 | 2005 | ಸಂಗೀತ |
7. | ಶ್ರೀ ಶಿವಕುಮಾರ ಸ್ವಾಮಿಗಳು | 1907 - 2019 | 2007 | ಸಾಮಾಜಿಕ ಸೇವೆ |
8. | ದೇ. ಜವರೇಗೌಡ | 1915 – 2016 | 2008 | ಶಿಕ್ಷಣ, ಸಾಹಿತ್ಯ |
9 | ಡಿ. ವೀರೇಂದ್ರ ಹೆಗ್ಗಡೆ | 1948 | 2009 | ಸಾಮಾಜಿಕ ಸೇವೆ |
ತತ್ಸಮಾನ ಜ್ಞಾನ ಪುಟಗಳು
ಹೊಸ ಪುಟಗಳು
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್ಲೈನ್ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!